ಪಾಪ

ಹಡೆದ ತಾಯಿ ಒಡಲುಂಡ ನೋವೆಷ್ಟೊ?
ಈ ಪುಣ್ಯಫಲವನ್ನಿಲ್ಲಿ ಬಿಟ್ಟು ಎಲ್ಲಿ ಹೋದಳೊ?
ಚೆಂದದ ಕಂದನ ನೋಡಿ ಅಬ್ಬ ಆಹಾ ಎಂದು ಕೆಲ ಮಂದಿ
ಸುತ್ತಮುತ್ತಿ ಅದನ್ನು ಪೋಷಿಸುವ ಪಣತೊಟ್ಟರು
ಒಡವೆ ವಸ್ತ್ರಗಳಿಂದಲಂಕರಿಸಿದರು ಕುತ್ತಿಗೆ ಮಟ ಉಸಿರು ಕಟ್ಟುವವರೆಗೆ
ತಿಂಡಿತಿನಿಸುಗಳ ಎಡೆಮಾಡಿಕೊಂಡು ಮೆರೆಸಿದರು ಅದನುಪವಾಸ
ಅದಕಾಗಿ ಮನೆಯೆಂದು ಕಲ್ಲಿಗೆ ಕಲ್ಲೇರಿಸಿ ಕಟ್ಟಿ
ಭದ್ರವಾಗಿರಲೆಂದು ಬೀಗ ಜಡಿದು ಕೂಡಿಟ್ಟರು
ಆ ಕೂಸಿನ ಗೋತ್ರೇತಿಹಾಸವ ಬಣ್ಣ ಬಣ್ಣ ಮಸಿಗಳಿಂದ
ಹೆಬ್ಬೊತ್ತಿಗೆಗಳಲಿ ಬರೆದು ಹಳೆಸಂದೂಕಗಳಲಿಟ್ಟು
ಪಾವಿತ್ರ್ಯತೆಯ ಸರ್ಪಗಾವಲು ಹಾಕಿದರು
ಅದರ ಹೆಸರಲ್ಲಿ ವರುಷವರುಷವೂ ಪರಿಷೆ ನಡೆಯುತ್ತದೆ
ಆಗ ಅದರ ಸಿದಿಗೆಯ ಕಟ್ಟಿ ಕೂಡಿಸಿ ಕುಣಿದಾಡುತ್ತಾರೆ
ಅಸಲಿಲ್ಲದೀ ಬಡ್ಡಿ ಮಕ್ಕಳು, ಬೆಂಕಿಯಿಲ್ಲದೆಡೆಯೂದಿ ಹೊಗೆ ಹಾಕುತ್ತಾರೆ
ತಾಯಿ, ಮರಳಿ ಬಂದು ತನ್ನ ಕಂದಮ್ಮನನ್ನು ನೋಡಿದರೆ???
ಸಮಾಧಿಯಡಿ ದೀರ್ಘನಿದ್ರೆಯಲ್ಲಿದೆ ಪಾಪ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಟ್ಟಿದರೆ ಮುನಿಯೂ, ಕನಕಾಂಬರ ಬೀಜವೂ
Next post ಕೊಚ್ಚೆ ಎಲ್ಡು ಭಾಗ ಮಾಡಿದ್ರೆ ನಾರೋದ್ಯಾವ್ದು? ನಾದೆ ಇರೋದ್ಯಾವ್ದು?

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys